ಮೊದಲ ಮಳೆ

ಮೊದಲ ಮಳೆ ಬಂದಿಹುದು ಬೇಸಿಗೆಯೊಳಿಂದು
ಭುವಿ ಕಾದು ನಿಂದಿಹುದು ಬರುವುದೇ ಎಂದು
– ಕಾತರದಿ ಬೆಂದು

ಸಪ್ತ ರಾಗದ ದನಿಯ ಕೇಳಿದಂತೆ
ಸುಪ್ತ ಸ್ವರಗಳ ಮುತ್ತು ಚೆಲ್ಲಿದಂತೆ
ತಪ್ತ ಬಾಳುವೆಯೊಳಗ ಬೇಗೆಯನು ಅರಿತಂತೆ
ಸುತ್ತೆಲ್ಲ ಸೇರುತಿವೆ ಮೋಡ ಸಂತೆ,

ಕಾದಲರು ಕಾಣುವರು ನಗೆಗಣ್ಣಿನಿಂದ;
ಒಬ್ಬರೊಬ್ಬರ ಹೃದಯದೊಲವಿನಾನಂದ.
ಪೂರ್ವ ಗಾಳಿಯ ತಂಪು ಮೈದೋರಿ, ನಲವಿಂದ
ಎದೆಯ ಬೆಂಕಿಯು ಮೈಗೆ ನೀಡಿಹುದು ಬಂಧ!

ದೂರ ನೀಲದಲೇನೊ ಕೂಡಿ ನೀಲ,
ಮೂಡಿ ಬಂದಿತು ಹಿಂದೆ ಮೇಘಜಾಲ;
ಗುಡುಗು ಸಿಡಿಲಿನ ಮೊರೆತದೆದೆಯ ಕಲ್ಲೋಲ,
ನಡುವೆ ಮಿಂಚಿನ ಮಳೆಯ ಹನಿಗಳಾಲೋಲ!

ಹಸುರು ಹೂ ಚೆಲ್ವಿಕೆಯ ಹಸದ ನೀಡಿ,
ಕಲ್ಲೆದೆಗು ತಾಕಿಸುತ ಒಲವ ಮೋಡಿ,
ಎದೆ ತುಂಬಿ, ಕಾಲುವೆಯು ಮುಂದೆ ಮುಂದೂಡಿ
ಹಚ್ಚ ಬಾಳಿನ ಹಸದ ತರುತಿಹುದು ನೋಡಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೀರನ ಕನಸುಗಳ ಸುತ್ತ……
Next post ಪ್ರೀತಿ ಎಂದೂ ಮುಗಿಯುವದಿಲ್ಲ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys